A., Narayana
(2019)
ಮಹಾತ್ಮನೊಂದಿಗೆ ನಮ್ಮದು ಎಂಥ ಸಂಬಂಧ?
Prajavani.
Abstract
ಗಾಂಧೀಜಿಯವರನ್ನು ದ್ವೇಷಿಸುವುದು ಎಂದರೆ ಅದು ದೇಶಭಕ್ತಿ, ಗಾಂಧೀಜಿಯವರನ್ನು ದೂಷಿಸುವುದು ಎಂದರೆ ಅದು ಸಾಮಾಜಿಕ ನ್ಯಾಯ ಎಂಬಿತ್ಯಾದಿ ರಾಜಕೀಯಪ್ರೇರಿತ ಪ್ರತಿಪಾದನೆಗಳೆಲ್ಲಾ ಒಂದು ನಿರ್ಣಾಯಕ ಹಂತ ತಲುಪಿರುವ ಇಂದಿನ ಸಂದರ್ಭದಲ್ಲಿ, ಮಹಾತ್ಮನ 150ನೇ ಜನ್ಮದಿನ ಆಡಂಬರದಿಂದ ಜರುಗುತ್ತಿದೆ. ಮತ್ತೆ ಮತ್ತೆ ಒಂದು ಪ್ರಶ್ನೆಯನ್ನು ಕೇಳದೇ ಇರಲು ಆಗುವುದಿಲ್ಲ. ಗಾಂಧಿಯವರನ್ನು ಈ ದೇಶದ ಜನ ನಿಜಕ್ಕೂ ಆಗ ಪ್ರೀತಿಸಿದ್ದರೇ? ಗೌರವಿಸಿದ್ದರೇ? ಈ ಪ್ರಶ್ನೆಗೆ ಮತ್ತೆ ಮತ್ತೆ ಅದೇ ಒಂದು ಉತ್ತರವನ್ನು ಕಂಡುಕೊಳ್ಳದೆ ಇರಲೂ ಆಗುವುದಿಲ್ಲ. ಇಲ್ಲ, ಒಂದು ಸಣ್ಣ ಸಂಖ್ಯೆಯ ಮಂದಿಯನ್ನು ಹೊರತುಪಡಿಸಿದರೆ ಗಾಂಧಿಯವರನ್ನು ಭಾರತೀಯರು ಎಂದೂ ಪ್ರೀತಿಸಲೂ ಇಲ್ಲ, ಗೌರವಿಸಲೂ ಇಲ್ಲ. ಅವರ ಜೀವಿತಕಾಲದಲ್ಲಿ ಬಹುತೇಕ ಭಾರತೀಯರು ಅವರನ್ನು ಗೌರವಿಸಿದ್ದು ಯಾಕೆಂದರೆ, ದೇಶವನ್ನಾಳುವ ಬ್ರಿಟಿಷರೇ ಅವರೆದುರು ಮಣಿಯುತ್ತಿದ್ದರು ಎನ್ನುವ ಕಾರಣಕ್ಕೆ. ಪ್ರಸ್ತುತ ಭಾರತದಲ್ಲಿ ಅಪಾರ ಗಾಂಧಿದ್ವೇಷ ಸೃಷ್ಟಿಯಾದ ನಂತರವೂ ಗಾಂಧಿ ಪ್ರೀತಿಯ ನಟನೆ ನಡೆಯುತ್ತಿರುವುದು ಯಾಕೆಂದರೆ, ಅವರನ್ನು ವಿಶ್ವ ಗೌರವಿಸುತ್ತದೆ ಎನ್ನುವ ಕಾರಣಕ್ಕೆ. ಈ ವಾದವನ್ನು ಸ್ವಲ್ಪ ವಿಶದೀಕರಿಸಬೇಕು.
Actions (login required)
|
View Item |