A., Narayana
(2019)
ಉಪಚುನಾವಣೆ: ಅಕ್ರಮವನ್ನು ಸಕ್ರಮಗೊಳಿಸುವ ಚಿತಾವಣೆ.
Prajavani.
Abstract
ರಾಜ್ಯದಲ್ಲಿ ಈಗ ನಡೆಯುತ್ತಿರುವುದು ಉಪಚುನಾವಣೆಯಲ್ಲ. ಶಾಸಕರ ಮಾರುಕಟ್ಟೆಯ ಪ್ರಾಂಗಣದಲ್ಲಿ ನಡೆಯುತ್ತಿರುವ ಅಕ್ರಮ- ಸಕ್ರಮ ದಂಧೆಯೊಂದನ್ನು ಉಪಚುನಾವಣೆ ಅಂತ ಸಭ್ಯ ಹೆಸರಲ್ಲಿ ಕರೆಯಲಾಗುತ್ತಿದೆ. ಇದು ಅಂಥಿಂಥ ದಂಧೆಯಲ್ಲ. ಈ ದಂಧೆಯ ಮೂಲಕ ವಿಧಾನಸಭೆಗೆ ಮರು ಆಯ್ಕೆ ಬಯಸಿರುವ ಅನರ್ಹರ ಮಂದೆಯಲ್ಲಿ ಒಬ್ಬನೇ ಒಬ್ಬ ಗೆಲುವಿನ ನಗೆ ಬೀರಿದರೂ ಅಲ್ಲಿ ಸೋಲುವುದು ಗೆದ್ದಾತನ ವಿರುದ್ಧ ಸ್ಪರ್ಧಿಸಿದವರಷ್ಟೇ ಅಲ್ಲ. ಅಲ್ಲಿ ನಿಜಕ್ಕೂ ಸೋಲುವುದು ಈ ದೇಶದ ಸಂವಿಧಾನ. ಹೀಗೆ ಸಂವಿಧಾನದ ಬೆನ್ನಿಗೆ ಇರಿದು ಅದರ ಅಂತಃಸತ್ವವನ್ನು ಸೋಲಿಸಲು ಅನರ್ಹಗೊಂಡಿರುವ ಹದಿನೈದು ಶಾಸಕರು ತೊಡೆ ತಟ್ಟುತ್ತಿರುವ ವಿದ್ಯಮಾನ ಒಂದೆಡೆ ವಿಜೃಂಭಿಸುತ್ತಿರುವಾಗಲೇ ಇನ್ನೊಂದೆಡೆ ಇಂದು (ನ. 26) ಸಂವಿಧಾನ ದಿನ ಎದುರಾಗಿದ್ದು ವಿಲಕ್ಷಣವೂ, ವಿಪರ್ಯಾಸಕರವೂ ಆಗಿ ಕಾಣಿಸುತ್ತದೆ.
Actions (login required)
|
View Item |