A., Narayana
(2016)
ಉದಾರೀಕರಣೋತ್ತರದ ಬಡತನ ಉಪಾಖ್ಯಾನ.
Prajavani.
Abstract
ಇಪ್ಪತ್ತೈದು ವರ್ಷ ತುಂಬಿದ ಭಾರತದ ಉದಾರ ಅರ್ಥನೀತಿಯ ಕತೆಯನ್ನು ಒಂದು ತಿಂಗಳಿಂದೀಚೆಗೆ ಬಗೆ ಬಗೆಯಾಗಿ ಹೇಳಲಾಗುತ್ತಿದೆ. ಈ ಕತೆಯನ್ನು ಈಗ ನಾವು ಉದಾರೀಕರಣೋತ್ತರ ಭಾರತದ ಶ್ರೀಮಂತಿಕೆಯ ಕತೆ ಮತ್ತು ಉದಾರೀಕರಣೋತ್ತರ ಭಾರತದ ಬಡತನದ ಕತೆ ಏನು ಎಂದು ಪ್ರತ್ಯೇಕವಾಗಿ ಗುರುತಿಸಿ ಹೇಳುವ ಅಗತ್ಯವಿದೆ.
ಅದು ಯಾಕೆ?. ಅದರಲ್ಲೇನು ವಿಶೇಷ? ಎಲ್ಲಾ ಅಭಿವೃದ್ಧಿಶೀಲ ಸಮಾಜದ ಕತೆಗಳಲ್ಲೂ ಬಡತನ ಮತ್ತು ಸಿರಿವಂತಿಕೆಯ ಕವಲುಗಳನ್ನು ಗುರುತಿಸಬಹುದು ಎಂದು ಯಾರಾದರೂ ಹೇಳಬಹುದು. ಉದಾರೀಕರಣೋತ್ತರ ಎಂದೇನು? ಸ್ವಾತಂತ್ರ್ಯೋತ್ತರ ಭಾರತದ ಕತೆಯೂ ಹೀಗೆಯೇ ಅಲ್ಲವೇ? ಎಂದು ಕೇಳಬಹುದು.
Actions (login required)
|
View Item |