A., Narayana
(2016)
ಇದು ನ್ಯಾಯಾಂಗವೇ ಸೃಷ್ಟಿಸಿದ ಅಪಸ್ವರ.
Prajavani.
Abstract
ಕೇಳಲೇಬಾರದಾಗಿದ್ದ ಕೆಲ ಕಹಿ ಸತ್ಯಗಳು ಕಿವಿಗಪ್ಪಳಿಸುತ್ತಿವೆ. ನ್ಯಾಯಾಂಗ ನಿಂದನೆಯ ತೂಗುಗತ್ತಿ ತಲೆಯ ಮೇಲಿದ್ದರೂ ಲೆಕ್ಕಿಸದೆ ಈ ದೇಶದ ಅತ್ಯುನ್ನತ ನ್ಯಾಯಾಲಯದ ಬಗ್ಗೆ ಹಾದಿ ಬೀದಿಗಳಲ್ಲಿ ಜನ ತೂಕದ ಪದಗಳನ್ನು ಬಳಸಿ ಹಗುರವಾಗಿ ಮಾತನಾಡುವಂತಾಗಿದೆ.
ನ್ಯಾಯಾಂಗ ನಿಂದನೆಯ ಭಯವಿಲ್ಲದೆ ಹೋಗಿದ್ದರೆ ಈ ತೂಕದ ಪದಗಳೆಲ್ಲಾ ಎಲ್ಲಿರುತ್ತಿದ್ದವು? ಅವುಗಳ ಬದಲಿಗೆ ಎಂತೆಂಥ ಪದಗಳ ಬಳಕೆಯಾಗುತ್ತಿತ್ತು ಎನ್ನುವುದನ್ನು ಊಹಿಸಲು ಕಷ್ಟವೇನೂ ಇಲ್ಲ. ಕಾವೇರಿ ನೀರಿನ ವಿವಾದದ ವಿಚಾರವಾಗಿ ಸುಪ್ರೀಂ ಕೋರ್ಟಿನ ನಡವಳಿಕೆಯ ಬಗ್ಗೆ ಕರ್ನಾಟಕದಲ್ಲಿ ಕೇಳಿಬಂದ ಅಪಸ್ವರ ಮೊದಲನೆಯದ್ದೂ ಅಲ್ಲ, ಕೊನೆಯದ್ದೂ ಅಲ್ಲ. ಇದೆಲ್ಲ ಪ್ರಾರಂಭವಾಗಿ ಸ್ವಲ್ಪ ಸಮಯವಾಗಿದೆ. ‘ಡೆನ್ಮಾರ್ಕ್ನಲ್ಲೇನೋ ಕೊಳೆಯುತ್ತಿದೆ’ ಎಂಬ ಷೇಕ್ಸ್ಪಿಯರ್ನ ‘ಹ್ಯಾಮ್ಲೆಟ್’ ನಾಟಕದ ಸಾಲು ಬೇಡ ಬೇಡ ಎಂದರೂ ನೆನಪಾಗುತ್ತದೆ.
Actions (login required)
|
View Item |