A., Narayana
(2016)
ಶಾಸನ ಮಾಡಲು ಇನ್ನೊಂದು ಅಂಗ ಬೇಕು.
Prajavani.
Abstract
ನಮ್ಮ ಕಾಲದಲ್ಲಿ ಅತ್ಯಂತ ಬೋರ್ ಎಂದು ಹೇಳಬಹುದಾದ ಒಂದು ವಿಷಯ ಎಂದರೆ ನಮ್ಮ ಸಂಸದರು ಮತ್ತು ಶಾಸಕರು ಸಂಸತ್ತಿನ ಮತ್ತು ಶಾಸನ ಸಭೆಗಳ ಅಧಿವೇಶನದಲ್ಲಿ ಹಾಜರಿರುವುದಿಲ್ಲ ಮತ್ತು ಕಲಾಪಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವುದು.
ಇಂತಹ ಟೀಕೆಗಳು ಅದೆಷ್ಟು ಬಾರಿ ಪುನರಾವರ್ತನೆ ಆಗುತ್ತವೆ ಎಂದರೆ ಅವನ್ನು ಕೇಳಿದಾಕ್ಷಣ ಕಿವಿ ಮುಚ್ಚಿಕೊಳ್ಳಬೇಕು ಮತ್ತು ನೋಡಿದಾಕ್ಷಣ ಪತ್ರಿಕೆಯ ಪುಟ ತಿರುಗಿಸಬೇಕು ಎನ್ನುವಂತಾಗುವಷ್ಟು. ವಿಷಯವೇನೋ ತೀರಾ ಗಂಭೀರವಾದದ್ದೇ. ಗಂಭೀರವಾದ ವಿಚಾರಗಳ ಬಗ್ಗೆ ಕೂಡಾ ಹಿಂದು ಮುಂದು ನೋಡದೆ, ಪರಿಸ್ಥಿತಿಯ ಆಳ, ಅಗಲ ತಿಳಿಯದೆ ಮಾಡುವ ಟೀಕೆಗಳು ಒಂಥರಾ ‘ತಿಥಿ’ ಸಿನಿಮಾದ ಸಿಂಗ್ರಿ ಗೌಡ ಅಲಿಯಾಸ್ ಸೆಂಚುರಿ ಗೌಡ ಪಾತ್ರದ ಸ್ವಗತದಂತೆ ಕೇಳಲಾರಂಭಿಸುತ್ತವೆ.
Actions (login required)
|
View Item |