A., Narayana
(2017)
ತ್ವರಿತ ರಾಜಕೀಯ, ಮಂದ ಅರ್ಥಲಯ.
Prajavani.
Abstract
ಭಾರತದ ಅರ್ಥವ್ಯವಸ್ಥೆ ಎಂದರೆ ಅದು ಹಾಗೇನೇ. ಹೇಗೆ ಎಂದರೆ ಅದೊಂದು ದೈತ್ಯನಂತೆ. ದೈತ್ಯ ಎನ್ನುವ ಪದ ಬಳಸಿದ್ದು ಎರಡರ್ಥದಲ್ಲಿ. ಮೊದಲನೆಯದಾಗಿ ಅದರ ಅಗಾಧ ಗಾತ್ರ. ಈ ಗಾತ್ರವೇ ಅದರ ಶಕ್ತಿ. ಅದನ್ನು ವಿಚಲಿತಗೊಳಿಸುವುದು ಅಷ್ಟೊಂದು ಸುಲಭವಲ್ಲ. ಸಾಮಾನ್ಯ ಆರ್ಥಿಕ ಬಿರುಗಾಳಿಗೆಲ್ಲಾ ಅದು ಮಿಸುಕಾಡುವುದಿಲ್ಲ. ಇಡೀ ಜಗತ್ತಿನ ಆರ್ಥಿಕತೆ ಹಿಂಜರಿತಕ್ಕೊಳಗಾಗಿದ್ದ ಸಂದರ್ಭಗಳಲ್ಲೂ ಅದು ತೀರಾ ತಗ್ಗಲಿಲ್ಲ, ಬಗ್ಗಲಿಲ್ಲ. ಹಿಂದೆ, ಅಂದರೆ ಆರ್ಥಿಕ ಉದಾರೀಕರಣದ ಪೂರ್ವದಲ್ಲಿ ಭಾರತದ ಆರ್ಥಿಕತೆಯನ್ನು ‘ನಿದ್ರಿಸುತ್ತಿರುವ ಆನೆ’ ಅಂತ ಕರೆದವರುಂಟು. ಇರಲಿ. ಭಾರತದ ಆರ್ಥಿಕತೆಯ ಬಗ್ಗೆ ದೈತ್ಯ ಎನ್ನುವ ಪದ ಬಳಸಿದ್ದಕ್ಕೆ ಎರಡನೆಯ ಕಾರಣ ಸಾಮಾನ್ಯವಾಗಿ ಎಲ್ಲ ಅರ್ಥವ್ಯವಸ್ಥೆಗೂ ಅನ್ವಯವಾಗುವಂತಹದ್ದು. ಅರ್ಥ ಜಗತ್ತು ಅಪ್ಪಟ ವ್ಯವಹಾರದ ಜಗತ್ತು. ಅಲ್ಲಿ ಕರುಣೆ, ಭಾವನೆ, ಮಮತೆ, ಸಮತೆ ಇತ್ಯಾದಿಗಳಿಗೆಲ್ಲಾ ಸ್ಥಾನವಿಲ್ಲ. ಹಣ, ಹಣ ಮತ್ತು ಹಣ. ಋಣ, ಋಣ ಮತ್ತು ಋಣ. ಎಲ್ಲವೂ ಕಡ್ಡಿ ಮುರಿದಂತೆ. ಇದೆ ಅಥವಾ ಇಲ್ಲ.
Actions (login required)
|
View Item |