A., Narayana
(2017)
ಆರಂಭದಲ್ಲೇ ಗಟಾರಕ್ಕಿಳಿದ ಚುನಾವಣಾ ಪ್ರಚಾರ.
Prajavani.
Abstract
ಚುನಾವಣಾ ಪ್ರಚಾರದ ಭರಾಟೆ ತೀವ್ರವಾದ ನಂತರ ರಾಜಕೀಯ ನಾಟಕದ ಪ್ರಮುಖ ಪಾತ್ರಧಾರಿಗಳು ನಾಲಗೆಯ ಮೇಲೆ ಹಿಡಿತ ಕಳೆದುಕೊಳ್ಳುವುದು, ಔಚಿತ್ಯದ ಎಲ್ಲಾ ಎಲ್ಲೆಗಳನ್ನೂ ಮೀರಿ ಆರೋಪ ಪ್ರತ್ಯಾರೋಪಗಳನ್ನು ಮಾಡುವುದು... ಇತ್ಯಾದಿಗಳೆಲ್ಲಾ ಭಾರತದ ರಾಜಕೀಯದಲ್ಲಿ ಮಾಮೂಲಾಗಿ ಹೋಗಿರುವ ವಿಚಾರ.
ವಿಶೇಷವೆಂದರೆ, ಕರ್ನಾಟಕದಲ್ಲಿ ಈ ಬಾರಿ ಇವೆಲ್ಲಾ ಈಗಲೇ ಭರಪೂರ ಕಾಣಿಸಿಕೊಳ್ಳುತ್ತಿವೆ. ಇಲ್ಲಿ ಪ್ರಾರಂಭವಾಗಿರುವುದು ಚುನಾವಣಾ ಪ್ರಚಾರದ ಪೂರ್ವರಂಗ ಮಾತ್ರ. ಮುಂದಿನ ತಿಂಗಳು ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ಚುನಾವಣಾ ಫಲಿತಾಂಶ ಬಂದ ನಂತರವಷ್ಟೇ ಕರ್ನಾಟಕದಲ್ಲಿ ಪ್ರಚಾರಕ್ಕೆ ಮೊದಲ ಅಂಕದ ಪರದೆ ಏರುವುದು. ಆದರೆ ಪೂರ್ವರಂಗದಲ್ಲೇ ತಾಳ, ಲಯ, ಶ್ರುತಿ ಎಲ್ಲ ತಪ್ಪುತ್ತಿರುವಂತೆ ತೋರುತ್ತಿದೆ. ನಾಲಗೆಗಳು ಎತ್ತೆಂದರತ್ತ ಹೊರಳುತ್ತಿವೆ.
Actions (login required)
|
View Item |