A., Narayana
(2017)
ಹುಸಿ–ನೈಜ ಜಗ್ಗಾಟದಲ್ಲಿ ಸಾಂವಿಧಾನಿಕ ಮೌಲ್ಯ ಅನಾಥ.
Prajavani.
Abstract
ಸೆಕ್ಯುಲರ್ವಾದ ಅಥವಾ ಸೆಕ್ಯುಲರಿಸಂ. ಭಾರತದ ರಾಜಕೀಯ ಚರ್ಚೆಗಳಲ್ಲಿ ಇದೊಂದು ವಿಷಯದ ಪರ– ವಿರೋಧ ವಾದಗಳಿಗಾಗಿ ಆದಷ್ಟು ಕಂಠ ಶೋಷಣೆ ಬೇರೆ ಯಾವುದೇ ವಿಚಾರದ ಕುರಿತಂತೆ ಯಾವುದೇ ದೇಶದಲ್ಲಿ ಆಗಿರಲಾರದು. ಎಲ್ಲಾ ಚರ್ಚೆಗಳೂ ದಿನಕಳೆದಂತೆ ಕಾವು, ಕಸುವು ಕಳೆದುಕೊಳ್ಳುವುದು ವಾಡಿಕೆ. ಭಾರತದಲ್ಲಿ ಸೆಕ್ಯುಲರ್ವಾದದ ವಿಚಾರ ಹಾಗಲ್ಲ. ಅದರ ಸುತ್ತ ನಡೆಯುವ ಖಂಡನೆ– ಮಂಡನೆಗಳು ದಿನಕಳೆದಂತೆ ಹೆಚ್ಚು ಹೆಚ್ಚು ತೀವ್ರವಾಗುತ್ತಿರುವುದು ಮಾತ್ರವಲ್ಲ, ಅವು ಬರ ಬರುತ್ತಾ ಹೊಸ ಹೊಸ ಆಯಾಮಗಳನ್ನು ಪಡೆದುಕೊಂಡು ಹೊಸ ಹೊಸ ಅಖಾಡಗಳನ್ನು ಪ್ರವೇಶಿಸುತ್ತಿವೆ. ಇದಕ್ಕೆ ಇನ್ನೊಂದು ಪುರಾವೆ ಎಂದರೆ ಅದು ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಮತ್ತು ಉಡುಪಿಯಲ್ಲಿ ನಡೆದ ಹಿಂದುತ್ವ ಸಮ್ಮೇಳನದ ವೇದಿಕೆಗಳಿಂದ ಏಕಕಾಲದಲ್ಲಿ ಸೆಕ್ಯುಲರ್ ಮಂತ್ರದ ಪಠಣ ನಡೆದಿದ್ದು ಮತ್ತು ವಿವಾದಗಳನ್ನು ಹುಟ್ಟುಹಾಕಿದ್ದು.
Actions (login required)
|
View Item |