A., Narayana
(2018)
ಮೈ ಲಾರ್ಡ್ಸ್! ಸತ್ಯ ಇಷ್ಟೇನಾ?
Prajavani.
Abstract
ಈ ದೇಶದಲ್ಲಿ ಕೊನೆಗೆ ಇದನ್ನೂ ನೋಡಬೇಕಾಯಿತು. ಸಮಸ್ತ ಜಗಳಗಳ ನ್ಯಾಯಾನ್ಯಾಯ ನಿರ್ಣಯಿಸುವ ಭಾರತದ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳು ಜಗಳವಾಡುವುದನ್ನು ನೋಡಬೇಕಾಯಿತು. ಆ ಜಗಳ ಅಕ್ಷರಶಃ ಬೀದಿಗೆ ಬಂದದ್ದನ್ನು ನೋಡಬೇಕಾಯಿತು. ಕಾಣಲು ಇನ್ನೇನು ಉಳಿದಿದೆ? ಪ್ರಜಾಸತ್ತೆಯ ವೇದಿಕೆಯಲ್ಲಿ ಇದಕ್ಕಿಂತ ದೊಡ್ಡ ದುರಂತ ನಾಟಕವೊಂದನ್ನು ಊಹಿಸಲೂ ಸಾಧ್ಯವಿಲ್ಲ. ಒಂದು ವೇಳೆ ಸ್ವತಃ ಸೇನಾ ಪಡೆಗಳೇ ದಂಗೆ ಎದ್ದಿದ್ದರೂ ಅದು ಇಷ್ಟೊಂದು ಗಂಭೀರ ವಿಚಾರವಾಗುತ್ತಿರಲಿಲ್ಲ. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ನಾಲ್ಕು ಜನ ಹಿರಿಯ ನ್ಯಾಯಮೂರ್ತಿಗಳು ಬಂಡೆದ್ದದ್ದು ಮತ್ತು ಆ ಬಂಡಾಯ ಎತ್ತಿದ ಗಂಭೀರ ಪ್ರಶ್ನೆಗಳೆಲ್ಲಾ ಹಾಗೆಯೇ ಉಳಿದು ಪ್ರಕರಣ ‘ತಣ್ಣಗಾದದ್ದು’ ನೋಡಿದರೆ ಹಿಂದೊಮ್ಮೆ ಬ್ರಿಟಿಷ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಭಾರತದ ಭವಿಷ್ಯದ ಬಗ್ಗೆ ಹೇಳಿದ್ದು ಮುಂದೊಂದು ದಿನ ಸತ್ಯವಾಗಲಿದೆಯೇ ಎಂಬ ಭಯ ತಣ್ಣಗೆ ಕಾಡುತ್ತದೆ.
Actions (login required)
![View Item View Item](/style/images/action_view.png) |
View Item |