A., Narayana
ಸಾಲಮನ್ನಾದ ಸುತ್ತ ಕಾಣಿಸಿದ ಸಮೂಹ ಸನ್ನಿ.
Prajavani.
Abstract
ರೈತರ ಸಾಲಮನ್ನಾ ಮಾಡುವ ವಿಷಯದ ಸುತ್ತ ಹೋದ ವಾರ ರಾಜ್ಯ ಕಂಡದ್ದು ಅಕ್ಷರಶಃ ಸಮೂಹ ಸನ್ನಿಯನ್ನು. ಚುನಾವಣೆಯನ್ನು ಗೆಲ್ಲುವ ಧಾವಂತದಲ್ಲಿ ಜಾತ್ಯತೀತ ಜನತಾದಳದವರು (ಜೆಡಿಎಸ್) ಹಿಂದೆ ಮುಂದೆ ಯೋಚಿಸದೆ ನೀಡಿದ ಭರವಸೆ ಮತ್ತು ಅದರ ಸುತ್ತ ನಡೆದುಹೋದ ರಂಪಾಟ ಈ ರಾಜ್ಯದ ರಾಜಕೀಯ ನಾಯಕತ್ವ ಯಾವ ಮಟ್ಟದ್ದು ಮತ್ತು ಅದರ ಯೋಚನೆಗಳು ಎಂತಹ ಸತ್ವದ್ದು ಎಂದು ಸಾರಿದವು. ರಾಜಕೀಯದ ಮಂದಿಯ ಮಾತು ಹಾಗಿರಲಿ. ಇಡೀ ಬೆಳವಣಿಗೆಗಳ ಸುತ್ತ ನಡೆದ ಸಾರ್ವಜನಿಕ ಚರ್ಚೆಯಾದರೂ ಹೇಗಿತ್ತು ಎಂದರೆ ಅದು ಎಲ್ಲೂ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯ ಬಾಲಿಶತನವನ್ನು ಪ್ರಶ್ನಿಸಲಿಲ್ಲ. ಬದಲಿಗೆ ‘ಪ್ರಣಾಳಿಕೆಯಲ್ಲಿ ಅದೇನೋ ಹೇಳಿದ್ದೀರಲ್ಲ, ಈಗ ಅದನ್ನು ಮಾಡಿಯೇ ತೀರಬೇಕು’ ಎಂದು ಒತ್ತಡ ತರುವ ರೀತಿಯಲ್ಲಿತ್ತು.
Actions (login required)
|
View Item |