A., Narayana
(2018)
ಸಾಯ ಹೊಡೆಯುವ ‘ಸಾಮೂಹಿಕ ಮನರಂಜನೆ’.
Prajavani.
Abstract
ಗಮನಿಸಿ. ಜನ ಗುಂಪು ಸೇರಿ ಯಾರನ್ನಾದರೂ ಯಾವುದೋ ಆಪಾದನೆ ಹೊರಿಸಿ ಸಾರ್ವಜನಿಕವಾಗಿ ಬಡಿದು ಕೊಲ್ಲುವುದು ದೇಶದಲ್ಲಿ ಹೊಸ ಸಾಮೂಹಿಕ ಮನರಂಜನೆಯಾಗುತ್ತಿದೆ. ಅಲ್ಲೊಂದು ಇಲ್ಲೊಂದು ಎಂಬಂತೆ ನಡೆಯುತ್ತಿದ್ದ ಇಂತಹ ಘಟನೆಗಳು ಈಗ ದಿನಕ್ಕೆ ಒಂದೆರಡು ಎಂಬಂತೆ ವರದಿಯಾಗುತ್ತಿವೆ. ಜನರ ಮಿದುಳು ಮತ್ತು ಹೃದಯವನ್ನು ಏಕಕಾಲದಲ್ಲಿ ಕೆಡಿಸಿರುವ ಈ ಸಾಮಾಜಿಕ ವೈರಸ್ಸಿನ ಮುಂದೆ ನಿಫಾ-ಗಿಫಾ ಎಲ್ಲಾ ಏನೂ ಅಲ್ಲ. ಮೊದಮೊದಲು ಕೆಲ ವಿಲಕ್ಷಣ ಸನ್ನಿವೇಶದಲ್ಲಿ ಯಾವುದೋ ಸಂಶಯದಿಂದ ಜನ ಹೀಗೆ ಮಾಡುತ್ತಿದ್ದರು. ಆಗಲೇ ಇಡೀ ಸಮಾಜ, ಇಡೀ ಪೊಲೀಸ್ ವ್ಯವಸ್ಥೆ, ಇಡೀ ರಾಜಕೀಯ ನಾಯಕತ್ವ ಎಚ್ಚೆತ್ತು ಅಪಾಯದ ಮುನ್ಸೂಚನೆಗಳನ್ನು ಅರಿತು ಈ ಪಿಡುಗಿಗೆ ಮದ್ದರೆಯಬೇಕಿತ್ತು. ಯಾರೂ ಅದಕ್ಕೆ ಮುಂದಾಗಲಿಲ್ಲ. ಯಾಕೆ ಮುಂದಾಗಲಿಲ್ಲ ಎಂದರೆ ಇಂತಹ ಸಾಮೂಹಿಕ ಉನ್ಮಾದಕ್ಕೆ ಬಲಿಯಾಗುತ್ತಿದ್ದವರು ಬಡವರು, ಭಿಕ್ಷುಕರು, ಚಿಂದಿ ಆಯುವವರು, ಮನೋರೋಗಿಗಳು ಆಗಿರುತ್ತಿದ್ದರು. ಈಗ ಪರಿಸ್ಥಿತಿ ಸಂಪೂರ್ಣ ಕೈಮೀರಿದ ಲಕ್ಷಣಗಳು ಕಾಣಿಸುತ್ತಿವೆ.
Actions (login required)
|
View Item |