A., Narayana
(2018)
ತುರ್ತು ಪರಿಸ್ಥಿತಿ ಎನ್ನುವುದೊಂದು ಶಾಶ್ವತ ಸ್ಥಿತಿ.
Prajavani.
Abstract
ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಅದಕ್ಕೆ 43 ವರ್ಷ ತುಂಬಿದ ನೆಪವೊಡ್ಡಿ ಪ್ರಧಾನಮಂತ್ರಿಯಾಗಿ ಕೇಂದ್ರದ ಪ್ರಮುಖ ಸಚಿವರು ಮತ್ತು ಬಿಜೆಪಿಯ ಪ್ರಭೃತಿಗಳೆಲ್ಲಾ ಸೇರಿ ಹಿಂದಿಲ್ಲ ಮುಂದಿಲ್ಲ ಎಂಬಂತೆ ಕಳೆದ ವಾರ ಮತ್ತೊಮ್ಮೆ ದೇಶಕ್ಕೆ ನೆನಪಿಸಿದರು. ಹೋದ ವರ್ಷ ಸಣ್ಣಗೆ ಪ್ರಾರಂಭವಾದ ತುರ್ತು ಪರಿಸ್ಥಿತಿಯ ಈ ನೆನವರಿಕೆ ಈ ಭಾರಿ ಸ್ವಲ್ಪ ಜೋರಾಗಿಯೇ ನಡೆಯಿತು. ಯಾವುದೇ ಚಾರಿತ್ರಿಕ ಘಟನೆಗೆ ಹತ್ತೋ, ಇಪ್ಪತ್ತೈದೋ, ಐವತ್ತೋ ತುಂಬಿದಾಗ ನೆನಪಿಸಿಕೊಳ್ಳುವುದು ವಾಡಿಕೆ. 43 ವರ್ಷ ತುಂಬಿತು ಅಂತ ಏನನ್ನನಾದರೂ ಸ್ಮರಿಸುವ, ಆಚರಿಸುವ ಸಂಪ್ರದಾಯ ಇಲ್ಲ. ತುರ್ತು ಪರಿಸ್ಥಿತಿಯ ಬಗ್ಗೆ ಹೊಸದಾಗಿ ಭಾರತೀಯರಿಗೆ ನೆನಪಿಸಬೇಕಾದದ್ದು ಏನೂ ಇಲ್ಲ. ಮತ್ತೊಂದು ಚುನಾವಣೆ ಬರುತ್ತಿದೆ. ಹಾಗಾಗಿ ನೆನಪಿರುವ ಎಲ್ಲವನ್ನೂ ಮತ್ತೊಮ್ಮೆ ನೆನಪಿಸಬೇಕಾಗುತ್ತದೆ.
Actions (login required)
|
View Item |