A., Narayana
(2018)
ಅಯ್ಯಪ್ಪ: ಸಂಪ್ರದಾಯ ನೆಪ.
Prajavani.
Abstract
ಮಹಿಳೆಯರ ಪ್ರವೇಶದ ವಿಚಾರದಲ್ಲಿ ವಿವಾದಗ್ರಸ್ತವಾಗಿರುವ ಶಬರಿಮಲೆ ದೇಗುಲ ಇರುವ ಕೇರಳದ ಉತ್ತರತುದಿಯ ಒಂದು ಸಣ್ಣ ದೇವಾಲಯಕ್ಕೆ ಸಂಬಂಧಿಸಿದ ಐತಿಹ್ಯವೊಂದು ಈ ಸಂದರ್ಭದಲ್ಲಿ ಪ್ರಸ್ತುತವಾಗುತ್ತದೆ. ಹಿಂದೆ ಆ ದೇವಸ್ಥಾನದ ಗರ್ಭಗುಡಿಯ ಪಕ್ಕ ಬಾಲಕನೊಬ್ಬ ಆಟವಾಡುತ್ತಿದ್ದದ್ದರಿಂದ ಪರಿಸರದ ಪಾವಿತ್ರ್ಯಕ್ಕೆ ಧಕ್ಕೆಯಾಯಿತೆಂದು ಅಲ್ಲಿನ ಅರ್ಚಕರು ಬಾಲಕನನ್ನು ಸಿಕ್ಕಾಪಟ್ಟೆ ಗದರಿಸಿದ್ದರಂತೆ. ಅರ್ಚಕರ ನಡತೆಯಿಂದ ಕೋಪಗೊಂಡ ದೇವರು ಆ ದೇವಸ್ಥಾನವನ್ನೇ ಬಿಟ್ಟು ರಾಜ್ಯದ ದಕ್ಷಿಣ ತುದಿಗೆ ಹೊರಟುಹೋದರು ಎನ್ನುತ್ತದೆ ಐತಿಹ್ಯ. ಅದಕ್ಕೆ ಕುರುಹು ಎಂಬಂತೆ ಪಕ್ಕದಲ್ಲೇ ಒಂದು ಗುಹೆ ಇದ್ದು, ಈ ಗುಹಾ ಮಾರ್ಗವಾಗಿಯೇ ದೇವರು ಹೊರಟುಹೋದದ್ದು ಎಂದು ಜನರು ಆಡಿಕೊಳ್ಳುತ್ತಾರೆ.
Actions (login required)
|
View Item |