A., Narayana
(2019)
ಅನ್ನ ಹಳಸಿತ್ತು, ನಾಯಿ ಹಸಿದಿತ್ತು.
Prajavani.
Abstract
ಕರ್ನಾಟಕದ ಹಳೆಯ ರಾಜಕೀಯ ನಾಟಕದ ಹೊಸ ಅಂಕದ ಬಗ್ಗೆ ಬರೆಯಹೊರಟಾಗ ಬೇಡಬೇಡವೆಂದರೂ ಈ ಲೇಖನಕ್ಕೆ ಶೀರ್ಷಿಕೆಯಾಗಿ ನೀಡಿದ ಗಾದೆಮಾತು ನೆನಪಿಗೆ ಬಂತು. ಹಾಗೆಂದು ಗಾದೆಯಲ್ಲಿ ಬರುವ ‘ನಾಯಿ’, ‘ಹಳಸಿದ ಅನ್ನ’ ಇತ್ಯಾದಿ ಪ್ರತಿಮೆಗಳಿಗೆ, ಈ ಲೇಖನದಲ್ಲಿ ಪ್ರಸ್ತಾಪವಾಗಲಿರುವ ರಾಜಕೀಯ ನಾಟಕದ ಸೂತ್ರಧಾರಿಗಳಿಗೆ ಮತ್ತು ಪಾತ್ರಧಾರಿಗಳಿಗೆ ಯಾವುದೇ ರೀತಿಯ ಸಂಬಂಧ ಕಲ್ಪಿಸುವುದು ಈ ಲೇಖನದ ಉದ್ದೇಶವಲ್ಲ. ಒಂದು ವೇಳೆ ಓದುಗರು ಹಾಗೊಂದು ಸಂಬಂಧವನ್ನು ಕಲ್ಪಿಸಿಕೊಂಡು ಈ ಲೇಖನವನ್ನು ಅರ್ಥ ಮಾಡಿಕೊಂಡರೆ ಅದಕ್ಕೆ ಈ ಲೇಖಕ ಯಾವುದೇ ರೀತಿಯಲ್ಲಿ ಜವಾಬ್ದಾರನಲ್ಲ. ಹಾಗಂತ, ಸಂಪೂರ್ಣ ದೇಶನಿಷ್ಠೆ, ರಾಜನಿಷ್ಠೆ, ರಾಜ್ಯನಿಷ್ಠೆ ಮತ್ತು ಧರ್ಮನಿಷ್ಠೆ ಇತ್ಯಾದಿಗಳೊಂದಿಗೆ ನಿವೇದಿಸಿಕೊಳ್ಳುವುದರೊಂದಿಗೆ ಲೇಖನ ಮುಂದುವರಿಯುತ್ತದೆ.
Actions (login required)
|
View Item |