A., Narayana
(2020)
‘ನಮ್ಮ ಧ್ವನಿ’ ಮಹೇಂದ್ರ ಕುಮಾರ್: ಪ್ರಶ್ನಾತೀತರನ್ನು ಪ್ರಶ್ನಿಸಿದ ಪ್ರಯತ್ನ.
Prajavani.
Abstract
‘ಸ್ಪೀಕಿಂಗ್ ಟ್ರೂತ್ ಟು ಪವರ್’ ಅಂತ ಒಂದು ಪರಿಕಲ್ಪನೆ ಇದೆ. ಅಂದರೆ, ಅಧಿಕಾರದಲ್ಲಿದ್ದವರು ಮತ್ತು ಅವರ ಸುತ್ತಲಿನವರು ಹೇಳುವುದೆಲ್ಲಾ ಸತ್ಯವೆಂದೂ ಮಾಡುವುದೆಲ್ಲವೂ ಸರಿಯೆಂದೂ ಜನ ವಿಪರೀತವಾಗಿ ನಂಬುವ ಕಾಲಘಟ್ಟದಲ್ಲಿ, ಯಾರೂ ಕೇಳಿಸಿಕೊಳ್ಳಲು ಇಷ್ಟಪಡದ ಕೆಲವು ಸತ್ಯಗಳನ್ನು ಬಹಿರಂಗವಾಗಿ ಹೇಳುವುದು. ಇದು ತೀರಾ ಅಪಾಯಕಾರಿ ಕೆಲಸ. ಈ ಅಪಾಯವನ್ನು ಮೀರಿ, ಒಂದು ಸಮಾಜದಲ್ಲಿ ಅಧಿಕಾರಸ್ಥರಿಗೆ ಅಪ್ರಿಯವಾದ ಸತ್ಯಗಳನ್ನು ಎಷ್ಟು ಹೇಳಲಾಗುತ್ತದೆ ಎನ್ನುವುದು, ಆ ಸಮಾಜದ ಸ್ವಾಸ್ಥ್ಯವನ್ನು ಮತ್ತು ಪ್ರಬುದ್ಧತೆಯನ್ನು ನಿರ್ಣಯಿಸುತ್ತದೆ.
Actions (login required)
|
View Item |