A., Narayana
(2020)
ಅನುರಣನ | ‘ಅಂತರ’ ಕಾಲದ ನಕ್ಷತ್ರಿಕರು.
Prajavani.
Abstract
ಕೊರೊನಾ ಸಂಕಷ್ಟದ ನಡುವೆ ಇವನ್ನೆಲ್ಲಾ ನೋಡುತ್ತಿದ್ದರೆ, ಕೆಲವು ಪೌರಾಣಿಕ ಕಥಾಪಾತ್ರಗಳು ನೆನಪಾಗುತ್ತವೆ. ಇವನ್ನೆಲ್ಲಾ ಎಂದರೆ ಯಾವ್ಯಾವುವು? ಅದಕ್ಕೆ ಮೊದಲು ಪೌರಾಣಿಕ ಲೋಕಕ್ಕೆ ಹೋಗಿಬರೋಣ.
ಹರಿಶ್ಚಂದ್ರ ಕಾವ್ಯದ ನಕ್ಷತ್ರಿಕ. ರಾಜ ಹರಿಶ್ಚಂದ್ರನು ವಿಶ್ವಾಮಿತ್ರನಿಂದ ತಾನು ಪಡೆದಿರದ ಸಾಲ ತೀರಿಸಲು ರಾಜ್ಯವನ್ನು ಕಳೆದುಕೊಂಡು, ಪತ್ನಿ-ಪುತ್ರನನ್ನು ಮಾರಿ, ಕೊನೆಗೆ ತನ್ನನ್ನೇ ತಾನು ಮಾರಿಕೊಳ್ಳುವ ದುಃಸ್ಥಿತಿ ತಲುಪಿರುತ್ತಾನೆ. ದುಡ್ಡು ವಸೂಲಿಗೆಂದು ವಿಶ್ವಾಮಿತ್ರನಿಂದ ಕಳುಹಿಸಲ್ಪಟ್ಟ ಶಿಷ್ಯ ನಕ್ಷತ್ರಿಕ, ಉಟ್ಟ ತುಂಡು ಬಟ್ಟೆ ಹೊರತು ಇನ್ನೇನನ್ನೂ ಹೊಂದಿರದ ಹರಿಶ್ಚಂದ್ರನ ಬಳಿ ‘ನಿನ್ನ ಹಿಂದೆ ಸುತ್ತಾಡಿದ್ದಕ್ಕೆ ನನಗೆ ಶುಲ್ಕ ಕೊಡು’ ಎಂದು ಪೀಡಿಸುತ್ತಾನೆ.
Actions (login required)
|
View Item |