A., Narayana
(2020)
ಬಯಲಾದ ಯುವ ನಾಯಕತ್ವದ ಬಣ್ಣ | ರಾಜಕೀಯ ಬಿಕ್ಕಟ್ಟಿನ ಒಳಸುಳಿಗಳು.
Prajavani.
Abstract
ಮಧ್ಯಪ್ರದೇಶದ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ಬಿಟ್ಟು, ಆ ಪಕ್ಷದ ಸರ್ಕಾರವನ್ನು ಉರುಳಿಸಿ, ಬಿಜೆಪಿ ಸೇರಿದ್ದು ಮತ್ತು ರಾಜಸ್ಥಾನದ ಯುವ ನಾಯಕ ಸಚಿನ್ ಪೈಲಟ್ ಬಿಜೆಪಿ ಸೇರುವುದಿಲ್ಲ ಎನ್ನುತ್ತಲೇ ಅದೇ ಹಾದಿ ಹಿಡಿದದ್ದನ್ನು ಕಾಂಗ್ರೆಸ್ಸಿಗಾದ ದೊಡ್ಡ ನಷ್ಟ ಅಂತಲೂ ಕಾಂಗ್ರೆಸ್ನ ಉನ್ನತ ನಾಯಕತ್ವದ ಸ್ವಯಂಕೃತಾಪರಾಧದ ಫಲ ಅಂತಲೂ ವ್ಯಾಖ್ಯಾನಗಳು ನಡೆಯುತ್ತಿವೆ. ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಸಿಂಧಿಯಾ ಸಂಚು ಹೂಡುತ್ತಿದ್ದ ಕಾಲಕ್ಕೆ ಇಡೀ ದೇಶಕ್ಕೆ ದೇಶವೇ ಸಿಎಎ ಮತ್ತು ಎನ್ಆರ್ಸಿ ಸುತ್ತ ನಡೆಯುತ್ತಿದ್ದ ಚಳವಳಿಯ ಕಾವಿನಲ್ಲಿತ್ತು. ಆ ಚಳವಳಿ ದೇಶದ ಮುಂದೆ ಇಟ್ಟದ್ದು ಅಂತಿಂತಹ ಪ್ರಶ್ನೆಗಳನ್ನಲ್ಲ. ಅತ್ಯಂತ ಮಹತ್ವದ ಸಾಂವಿಧಾನಿಕ ಮತ್ತು ರಾಷ್ಟ್ರೀಯ ಸಮಗ್ರತೆಯ ಪ್ರಶ್ನೆಗಳನ್ನು.
Actions (login required)
|
View Item |