A., Narayana
(2020)
ಸಾಂವಿಧಾನಿಕ ಮೌನವೊಂದಕ್ಕೆ ಮಾತು ನೀಡಲು ಯತ್ನಿಸಿದ ‘ಕೇಶವಾನಂದ ಭಾರತಿ’ತೀರ್ಪು.
Prajavani.
Abstract
‘ಹಿಸ್ ಹೋಲಿನೆಸ್ ಕೇಶವಾನಂದ ಭಾರತಿ ಶ್ರೀಪಾದಗಳ್ವರು ಅಂಡ್ ಅದರ್ಸ್ ವರ್ಸಸ್ ದ ಸ್ಟೇಟ್ ಆಫ್ ಕೇರಳ ಅಂಡ್ ಅನದರ್ (1973)...’
ಭಾರತದ ಸಾಂವಿಧಾನಿಕ ಕಾನೂನುಗಳ ಆಸಕ್ತರನ್ನು ಹಲವು ಪರಿಗಳಲ್ಲಿ ಕಾಡಿ ದಣಿಸಿರುವ ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನ ಅಧಿಕೃತ ಶಿರೋನಾಮೆ ಯಥಾವತ್ತಾಗಿ ಮೇಲಿನ ಪದಗಳ ರೂಪದಲ್ಲಿದೆ. ತೀರ್ಪಿಗೆ ಎಡನೀರು ಮಠದ ಮುಖ್ಯಸ್ಥ ಕೇಶವಾನಂದ ಭಾರತಿಯವರ ಹೆಸರು ಬಂದದ್ದು ಒಂದು ಆಕಸ್ಮಿಕ. ಕನ್ನಡದ ಮಣ್ಣು ಕಾಸರಗೋಡಿನ ಎಡನೀರು ಮಠದ ಭಕ್ತರು ಬಳಸುವ ‘ಶ್ರೀಪಾದಂಗಳವರು’ ಎಂಬ ಪದ ಸುಪ್ರೀಂ ಕೋರ್ಟಿನ ಹಿಂದಿ ಭಾಷಿಗರ ಕೈಯಲ್ಲಿ ‘ಶ್ರೀಪಾದಗಳ್ವರು’ ಎಂದು ರೂಪಾಂತರವಾದದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಕಳೆದ 47 ವರ್ಷಗಳಲ್ಲಿ ಈ ದೇಶ ಆ ತೀರ್ಪನ್ನು ಅರ್ಥೈಸಿಕೊಳ್ಳಲು ಪಡುತ್ತಿರುವ ಕಷ್ಟ, ಅದರ ಶಿರೋನಾಮೆಯನ್ನು ಓದುವಲ್ಲಿ ಸುಪ್ರೀಂ ಕೋರ್ಟಿನ ಸಿಬ್ಬಂದಿ ವರ್ಗ ಅನುಭವಿಸಿದ ತಡವರಿಕೆಯಿಂದಲೇ ಸಾಂಕೇತಿಕವಾಗಿ ಪ್ರಾರಂಭವಾಗುತ್ತದೆ ಅನ್ನಿಸುತ್ತದೆ.
Actions (login required)
|
View Item |