A., Narayana
(2020)
ರಾಜ್ಯೋತ್ಸವದಾಚೆಗಿನ ಕರ್ನಾಟಕ ಪ್ರಜ್ಞೆ...
Prajavani.
Abstract
ದೇಶದ ಎಲ್ಲಾ ರಾಜ್ಯಗಳ ಸ್ವಾಯತ್ತತೆ ಮತ್ತು ಸ್ವಾಭಿಮಾನದ ಮೇಲೆ ಇನ್ನಿಲ್ಲ ಎಂಬಂತಹ ಪ್ರಹಾರಗಳು ನಡೆಯುತ್ತಿರುವ ಕಾಲದಲ್ಲಿ ಮತ್ತೆ ಕರ್ನಾಟಕ ರಾಜ್ಯೋತ್ಸವ ಬಂದಿದೆ. ರಾಜ್ಯಗಳು ಅಕ್ಷರಶಃ ತತ್ತರಿಸಿಹೋಗಿವೆ. ಕೆಲ ರಾಜ್ಯಗಳು ಕೇಂದ್ರ ಸರ್ಕಾರದ ಪಾಳೆಗಾರಿ ಪಾರುಪತ್ಯವನ್ನು ಪತ್ರ ಮುಖೇನ ಪ್ರತಿಭಟಿಸುತ್ತಿವೆ. ಇನ್ನು ಕೆಲವು ರಾಜ್ಯಗಳು ಅಂಗಲಾಚುತ್ತಿವೆ. ಮತ್ತೆ ಕೆಲವು ರಾಜ್ಯಗಳು (ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷದ ಆಧಿಪತ್ಯದಲ್ಲಿರುವ ರಾಜ್ಯಗಳು) ಸಾಮಂತರಂತೆ ದೈನೇಸಿಯಾಗಿ ತಲೆತಗ್ಗಿಸಿ ನಿಂತಿವೆ. ಕರ್ನಾಟಕವು ಮೂರನೆಯ ವರ್ಗಕ್ಕೆ ಸೇರಿದೆ. ಆದುದರಿಂದ, ಕರ್ನಾಟಕದಲ್ಲಿ ಆಳುವ ಸರ್ಕಾರಕ್ಕೆ ರಾಜ್ಯೋತ್ಸವ ಆಚರಿಸುವ ನೈತಿಕ ಹಕ್ಕು ಉಳಿದಿಲ್ಲ. ಜನರು, ಕರ್ನಾಟಕದ ಗತವೈಭವವನ್ನು ನೆನೆನೆನೆದು ಬೇಕಾದರೆ ರಾಜ್ಯೋತ್ಸವ ಆಚರಿಸಬಹುದು.
Actions (login required)
|
View Item |