A., Narayana
(2023)
ನೈತಿಕ ಶಿಕ್ಷಣ, ಹೀಗೊಂದು ಮಹಾಮೌನ.
Prajavani.
Abstract
ಶಾಲೆಯಲ್ಲಿ ಮಕ್ಕಳು ಬಸವಣ್ಣನವರ ಶ್ರೇಷ್ಠ ಬದುಕಿನ ಬಗ್ಗೆ ತಿಳಿದುಕೊಂಡು, ಅವರ ವಚನದಲ್ಲಿರುವ ‘ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯಪಡಬೇಡ’ ಎಂಬಿತ್ಯಾದಿ ನುಡಿಗಳನ್ನು ಓದಿ ನೈತಿಕ ಮೌಲ್ಯಗಳನ್ನು ಕಲಿಯುತ್ತಾರೆ. ಆದರೆ ಅದೇ ಪಠ್ಯಪುಸ್ತಕದಲ್ಲಿ, ಸಾರ್ವಜನಿಕ ಭಾಷಣಗಳಲ್ಲಿ ಆಕರ್ಷಕವಾಗಿ ಸುಳ್ಳು ಹೇಳುತ್ತಾ, ‘ಅನ್ಯರ ಕುರಿತು ಅಸಹ್ಯಪಡಬೇಕು’ ಎನ್ನುವ ಸಂದೇಶವನ್ನು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಬಿತ್ತುವ ವ್ಯಕ್ತಿಯೋರ್ವ ಬರೆದ ಬರಹವನ್ನು ಸೇರಿಸಿದರೆ, ಅದನ್ನು ಓದುವ ಮಕ್ಕಳು ಏನು ಕಲಿಯುತ್ತಾರೆ? ಸುಳ್ಳು ಹೇಳಿದರೆ ನಾವು ಕೂಡಾ ಪ್ರಸಿದ್ಧಿಗೆ ಬರಬಹುದು ಎಂದು ತಾನೇ? ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕೆಂದು ಉತ್ಸಾಹದಿಂದ ಹೊರಟು ಚಿತ್ರವಿಚಿತ್ರ ಸಲಹೆಗಳನ್ನು ಪಡೆಯುತ್ತಿರುವ ಕರ್ನಾಟಕ ಸರ್ಕಾರಕ್ಕೆ ಈ ಪ್ರಶ್ನೆಯನ್ನು ಯಾರಾದರೂ ಕೇಳಬೇಕಿತ್ತಲ್ಲವೇ?
Actions (login required)
|
View Item |